dtvkannada

ಪುತ್ತೂರು: ಸುಳ್ಯಪದವು – ಕೌಡಿಚಾರು ಮಾರ್ಗದಲ್ಲಿ ದಿನನಿತ್ಯ ಸಾವಿರಾರು ಕಲ್ಲಿನ ಲಾರಿಗಳು ಯಾವುದೋ ಲಾರಿ ರೇಸ್ ನಡೆಯುವಂತೆ ಅಪರಿಮಿತ ವೇಗದಲ್ಲಿ ಸಂಚರಿಸುತ್ತಿದ್ದು, ಇದರಿಂದಾಗಿ ಸಾಕಷ್ಟು ಅಪಘಾತ ಪ್ರಕರಣಗಳು ನಡೆಯುತ್ತಿವೆ. ಹಲವು ಬಾರಿ ಈ ಕುರಿತು ಅವರ ಯೂನಿಯನ್ ಗಮನಕ್ಕೆ ತಂದರು ವೇಗದ ಮಿತಿಗೆ ಕಡಿವಾಣ ಬಿದ್ದಿಲ್ಲ. ಬೆಳಗ್ಗೆ ಹಾಗೂ ಸಂಜೆ ಸಮಯದಲ್ಲಿ ವಿಧ್ಯಾರ್ಥಿಗಳು, ಕಾರ್ಮಿಕರು ರಸ್ತೆಯಲ್ಲಿ ಸಂಚರಿಸುತ್ತಿದ್ದು ಹೆಚ್ಚಿನ ದುರ್ಘಟನೆ ನಡೆಯುವ ಮುನ್ನ ಇದಕ್ಕೆ ಕಡಿವಾಣ ಹಾಕಬೇಕಾಗಿದೆ.



ಆದುದರಿಂದ ನಾಳೆ ದಿನಾಂಕ 4/12/2021 ರಂದು ಬೆಳಿಗ್ಗೆ 7.30 ಕ್ಕೆ ಸರಿಯಾಗಿ ಕೊಯಿಲದಲ್ಲಿ ಕಲ್ಲಿನ ಲಾರಿಗಳನ್ನು ತಡೆಹಿಡಿಯುವ ಮೂಲಕ ಪ್ರತಿಭಟನೆ ನಡೆಸಲಾಗುವುದು. ಸಾಮಾಜಿಕ ಕಾಳಜಿಯುಳ್ಳ ಪ್ರತಿಯೊಬ್ಬರೂ ನಾಳೆ 7.30 ಕ್ಕೆ ಸರಿಯಾಗಿ ಬಂದು ಸಹಕರಿಸಬೇಕಾಗಿ ಕೇಳಿಕೊಳ್ಳುತ್ತಿದ್ದೇವೆ ಎಂದು ಆಯೋಜಕರು ಪ್ರಕಟನೆಗೆ ತಿಳಿಸಿದ್ದಾರೆ

By dtv

Leave a Reply

Your email address will not be published. Required fields are marked *

error: Content is protected !!