ಉಪ್ಪಿನಂಗಡಿ: ಪೆದಮಲೆಯಿಂದ ತೆಕ್ಕಾರು ವರೆಗೂ ಸಂಚರಿಸುವ ಲಾರಿಯಿಂದ ಸಿಮೆಂಟ್ ಮಿಶ್ರಿತ ಜಲ್ಲಿಕಲ್ಲು ಮುಖ್ಯ ರಸ್ತೆಗೆ ಬಿದ್ದಿದ್ದು ದ್ವಿಚಕ್ರ ಸವಾರರು ಜೀವವನ್ನು ಕೈಯಲ್ಲಿ ಹಿಡಿದು ಪ್ರಯಾಣಿಸುವ ಪರಿಸ್ಥಿತಿ ಇದೀಗ ನಿರ್ಮಾಣವಾಗಿದೆ.
![](http://dtvkannada.in/wp-content/uploads/2022/01/IMG-20220111-WA0078-576x1024.jpg)
ರಸ್ತೆಗಳಲ್ಲಿ ಬಿದ್ದಿರುವ ಸಿಮೆಂಟ್ ಮಿಶ್ರಿತ ಜಲ್ಲಿಕಲ್ಲುಗಳನ್ನು ತಕ್ಷಣವೇ ತೆರವುಗೊಳಿಸಿ ಜನರ ಜೀವಗಳನ್ನು ಉಳಿಸಬೇಕೆಂದು S.D.P.I ತೆಕ್ಕಾರು ನಿಯೋಗ ಇಂದು ತೆಕ್ಕಾರು ಗ್ರಾಮ ಪಂಚಾಯತ್ ಅಧ್ಯಕ್ಷರಿಗೆ ಮನವಿ ಮಾಡಿದರು.
ತಕ್ಷಣವೇ ತೆರವುಗೊಳಿಸದಿದ್ದಲ್ಲಿ ಪ್ರತಿಭಟನೆಯ ಎಚ್ಚರಿಕೆಯನ್ನು ನೀಡಿದ್ದಾರೆ.
![](http://dtvkannada.in/wp-content/uploads/2022/01/IMG-20220111-WA0080-1024x485.jpg)
![](http://dtvkannada.in/wp-content/uploads/2022/01/IMG-20220111-WA0079.jpg)
S.D.P.I ಬೆಳ್ತಂಗಡಿ ತಾಲೂಕು ಸದಸ್ಯ ಇನಾಸ್ ರೋಡಿಗ್ರಸ್, SDPI ತೆಕ್ಕಾರು ಗ್ರಾಮ ಸಮಿತಿ ಅಧ್ಯಕ್ಷ ನಝೀರ್ ಬಾಜರ, ಗ್ರಾಮ ಸಮಿತಿ ಉಪಾಧ್ಯಕ್ಷ ನೌಷಾದ್ ಉಪಸ್ಥಿತರಿದ್ದರು.
D tv ಗೆ ಧನ್ಯವಾದಗಳು
ಅಧ್ಯಕ್ಷರು SDPI ತೆಕ್ಕರು ಸಮಿತಿ
ಅಬ್ದುಲ್ ನಝೀರ್