ಬೆಳ್ತಂಗಡಿ: ಜಮೀನು ವಿಚಾರಕ್ಕೆ ಸಂಬಂಧಿಸಿ ವ್ಯಕ್ತಿಯೊಬ್ಬರನ್ನು ಮಾರಕಾಸ್ತ್ರಗಳಿಂದ ಕಡಿದು ಕೊಲೆಗೈದ ಘಟನೆ ರೆಖ್ಯ ಸಮೀಪದ ನೇಲ್ಯಡ್ಕದ ದೇವಸ್ಯದಲ್ಲಿ ಜ.13 ರಂದು ಬೆಳಿಗ್ಗೆ ನಡೆದಿದೆ.
![](http://dtvkannada.in/wp-content/uploads/2022/01/IMG-20220113-WA0027-1024x493.jpg)
ಎಲ್ಐಸಿ ಪ್ರತಿನಿಧಿಯಾಗಿದ್ದ ಕೃಷಿಕ ದೇವಸ್ಯ ನಿವಾಸಿ ಶಾಂತಪ್ಪ ಗೌಡ (40 ವ) ಕೊಲೆಯಾದವರು.
ಜಮೀನು ಕುರಿತಾದ ವ್ಯಾಜ್ಯಕ್ಕೆ ಸಂಬಂಧಿಸಿ ಈ ಕೊಲೆ ಕೃತ್ಯ ನಡೆದಿದೆ ಎಂದು ಮಾಹಿತಿ ಲಭ್ಯವಾಗಿದೆ.
ಘಟನಾ ಸ್ಥಳಕ್ಕೆ ಧರ್ಮಸ್ಥಳ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ ಎಂದು ತಿಳಿದು ಬಂದಿದೆ.