ಬೆಳ್ತಂಗಡಿ (ಜ 26): 73ನೇ ಗಣರಾಜ್ಯೋತ್ಸವದ ಪ್ರಯುಕ್ತ ಎಸ್.ಡಿ.ಪಿ.ಐ ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ವತಿಯಿಂದ ಕ್ಷೇತ್ರದ ವಿವಿಧ ಕಡೆಗಳಲ್ಲಿ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು.
ತಾಲೂಕಿನ ಪುಂಜಾಲಕಟ್ಟೆ, ಗುರುವಾಯನಕೆರೆ, ಪಡಂಗಡಿ, ಸುನ್ನತ್ ಕೆರೆ, ಮದ್ದಡ್ಕ, ಬಂಗೇರಕಟ್ಟೆ, ಲಾಯಿಲ, ಪಡ್ಡಂದಡ್ಕ, ಕುಂಟಿನಿ, ತೆಕ್ಕಾರು, ಕುದ್ರಡ್ಕ, ಶಿರ್ಲಾಲು ಹಾಗೂ ಇಳಂತಿಲದಲ್ಲಿ ಧ್ವಜಾರೋಹಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.