dtvkannada

ಕೊಳ್ನಾಡು: ಕೊಳ್ನಾಡು ಗ್ರಾಮದ ಮಂಚಿ ಪ್ರೌಢ ಶಾಲೆಯಲ್ಲಿ ಕಲಿಯುತ್ತಿರುವ ನಾಫೀ ಅನಾರೋಗ್ಯ ಪೀಡಿತ ತಂದೆಗೆ ಎರಡು ಮಕ್ಕಳಲ್ಲಿ ಕಿರಿಯವನಾಗಿದ್ದು ಶಾಲಾ ರಜಾ ದಿವಸದಲ್ಲಿ ಕೆಲಸಕ್ಕೆ ಹೋಗಿ ಮನೆಗೆ ಖರ್ಚಿಗೆ ಹಣವನ್ನು ಕೊಡುತ್ತಿದ್ದರು.

ದುಡಿಯುವವರು ಬೇರೆ ಯಾರೂ ಇಲ್ಲದ ಕಾರಣ ಅವರಿಗೆ ರೇಷನ್ ಕಿಟ್ ಹಣವನ್ನು ವಿತರಣೆ ಮಾಡಿ ಆ ಹುಡುಗನಿಗೆ ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಸುಶೀಲಾ ಮತ್ತು ಶಿಕ್ಷಕರ ಸಾನಿಧ್ಯದಲ್ಲಿ ಸನ್ಮಾನ ಮಾಡಲಾಯಿತು.

ಈ ಸಂದರ್ಬದಲ್ಲಿ KM CHARITABLE ಟ್ರಸ್ಟ್ ಸ್ಥಾಪಕ ಕೆ. ಎಂ ನಾಸಿರ್, ಸಾಲೆತ್ತೂರು ಪಂಚಾಯತ್ ಅಧ್ಯಕ್ಷ ಹಸೈನಾರ್, ಟ್ರಸ್ಟ್ ಸದಸ್ಯರಾದ ಮುನೀರ್ ಕೆ. ಎಂ ಮತ್ತಿತರರು ಉಪಸ್ಥಿತರಿದ್ದರು.

By dtv

Leave a Reply

Your email address will not be published. Required fields are marked *

error: Content is protected !!