ಬೆಳ್ತಂಗಡಿ: ಕಳೆದ ವಾರ ಲಿವರ್ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲು ಮಾಡಿದ್ದ ಬೆಳ್ತಂಗಡಿ ಮೂಲದ ಪುಟ್ಟ ಬಾಲಕಿ ಇಂದು ಬೆಳಗ್ಗೆ ನಿಧನ ಹೊಂದಿದ್ದಾಳೆ.
![](http://dtvkannada.in/wp-content/uploads/2022/02/1643801089441.jpeg)
ಪಡಂಗಡಿ ಗ್ರಾಮದ ಬದ್ಯಾರ್ ನಿವಾಸಿ ವಿಲಿಯಂ ಹಾಗೂ ಅನಿತಾ ಡಿಸಿಲ್ವ ಅವರ ಮಗಳು ಏಂಜಲ್ ಅನುಷಾ ಡಿಸಿಲ್ವ (11) ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾಳೆ.
ವಾರಗಳ ಹಿಂದೆ ಏಕಾಏಕಿ ಅನಾರೋಗ್ಯಕ್ಕೀಡಾದ ಬಾಲಕಿಯನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಬಾಲಕಿಯು ಅರಸಿನ ಕಾಮಾಲೆ ಕಾಯಿಲೆಯಿಂದ ಬಾಲಕಿಯ ಲಿವರ್ ಜರ್ಝರಿತಗೊಂಡಿದ್ದು, ಲಿವರ್ ಕಸಿ ಮಾಡಲು ಸೋಮವಾರ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ನಿಧನ ಹೊಂದಿದ್ದಾಳೆ.
ಏಂಜಲ್ ಅನುಷಾ ಡಿಸಿಲ್ವ ಬೆಳ್ತಂಗಡಿ ಚರ್ಚ್ ಶಾಲೆಯ 7 ನೇ ತರಗತಿಯ ವಿದ್ಯಾರ್ಥಿನಿಯಾಗಿದ್ದು, ಪಠ್ಯ ಹಾಗೂ ಪಠ್ಯತೇರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದ ಪ್ರತಿಭಾವಂತ ವಿದ್ಯಾರ್ಥಿನಿಯಾಗಿದ್ದಳೆಂದು ಜನ ಆಡಿಕೊಳ್ಳುತ್ತಿದ್ದಾರೆ.