ಉಡುಪಿ: ಜಿಲ್ಲೆಯ ಕುಂದಾಪುರ ಸರಕಾರಿ ಜೂನಿಯರ್ ಕಾಲೇಜ್ ಹಿಜಾಬ್ ವಿವಾದ ತಣ್ಣಗಾಗುವ ಲಕ್ಷಣ ಕಾಣುತ್ತಿಲ್ಲ. ಈ ಮಧ್ಯೆ ಇಂದು ಈ ವಿಷಯ ಹೆಚ್ಚು ಕಾವು ಪಡೆದಿತ್ತು. ಇದೀಗ ತರಗತಿ ಬಿಡುತ್ತಿದ್ದಂತೆ ಇತ್ತಂಡಗಳ ಗುಂಪು ಜಮಾವಣೆಯಾಗಿ ಪರಿಸ್ಥಿತಿ ಉಲ್ಭಣಗೊಂಡಿದೆ.
ಇಂದು ಬೆಳಗ್ಗೆಯಿಂದ ಸಂಜೆಯವರೆಗೆ ಕಾಲೇಜಿನ ಗೇಟ್ ಬಳಿ ಹಿಜಾಬ್ ಧರಿಸಿದ್ದ ವಿದ್ಯಾರ್ಥಿನಿಯರು ಕುಳಿತಿದ್ದರು. ಸಂಜೆ ವೇಳೆಗೆ ಕಾಲೇಜು ಬಿಡುವ ವೇಳೆ ಹೊರಗಿನಿಂದ ಎರಡು ಭಿನ್ನ ಗುಂಪುಗಳು ಸ್ಥಳದಲ್ಲಿ ಭಾರೀ ಸಂಖ್ಯೆಯಲ್ಲಿ ಜಮಾವಣೆಗೊಂಡರು. ತಕ್ಷಣವೇ ಎಚ್ಚೆತ್ತ ಕುಂದಾಪುರ ಪೇಟೆಯಲ್ಲಿ ಪೊಲೀಸರು ಸ್ಥಳದಲ್ಲಿದ್ದ ಎಲ್ಲರನ್ನು ಚದುರಿಸಿದ್ದಾರೆ.
![](https://i0.wp.com/nammakudlanews.com/wp-content/uploads/2022/02/kundapur-3.jpg?resize=679%2C385&ssl=1)