ಮಂಗಳೂರು : ಕಳೆದ 15 ದಿನಗಳಿಂದ ಸುರತ್ಕಲ್ ನಲ್ಲಿ ಅವೈಜ್ಞಾನಿಕ ಟೋಲ್ ಸಂಗ್ರಹದ ವಿರುದ್ಧ ಟೋಲ್ಗೇಟ್ ಪಕ್ಕದಲ್ಲಿ ನ್ಯಾಯಯುತವಾಗಿ ಆಹೋ ರಾತ್ರಿ ಹೋರಾಟ ನಡೆಸುತ್ತಿದ್ದ ಆಸಿಫ್ ಆಪತ್ಭ್ಬಾಂದವರನ್ನು ಇಂದು ಪೋಲಿಸರು ಸುಳ್ಳು ಕೇಸನ್ನು ದಾಖಲಿಸಿ ಬಂಧಿಸಿದ್ದರು.
![](http://dtvkannada.in/wp-content/uploads/2022/02/IMG-20220222-WA0031-1024x622.jpg)
ಬಂಧನದಿಂದ ಬಿಡುಗಡೆಗೊಳಿಸುವ ವಿಚಾರವಾಗಿ ಎಸ್ ಡಿಪಿಐ ನಿಯೋಗವು ಪೊಲೀಸ್ ಆಯುಕ್ತರೊಂದಿಗೆ ನಡೆಸಿದ ಮಾತುಕತೆಯ ಫಲವಾಗಿ ಹೋರಾಟಗಾರ ಆಸಿಫ್ ಆಪತ್ಭ್ಬಾಂದವರನ್ನು ಬಿಡುಗಡೆ ಮಾಡಸಲಾಗಿದೆಯೆಂದು ತಿಳಿದು ಬಂದಿದೆ.
ಹೊರಟಗಾರ ಬಂಧಿಸಿದ ನಂತರ ಬಿಡುಗಡೆ ಗೊಂಡ ಆಸೀಫ್ ಆಪತ್ಭಾಂದವರಿಗೆ ಹೂವಿನ ಹಾರ ಹಾಕಿ ಸ್ವಾಗತಿಸಿದ್ದಾರೆ.
ಈ ಸಂದರ್ಭದಲ್ಲಿ ಅಬೂಬಕ್ಕರ್ ಕುಳಾಯಿ, ಅನ್ವರ್ ಸಾದತ್ ಬಜತ್ತೂರು, ಜಮಾಲ್ ಜೋಕಟ್ಟೆ,ಯಾಸೀನ್ ಅರ್ಕುಳ, ದಾವೂದ್, ತೌಸೀಫ್ ಮತ್ತಿತರರು ಉಪಸ್ಥಿತರಿದ್ದರು.