ಉಳ್ಳಾಲ: ದಕ್ಷಿಣ ಭಾರತದ ಅಜ್ಮೀರ್ ಎಂದೇ ಪ್ರಸಿದ್ಧಿಯಾದ ಉಳ್ಳಾಲ ಉರೂಸ್ ಕಾರ್ಯಕ್ರಮ ಕಳೆದ ಕೆಲವು ದಿನಗಳಿಂದ ನಡೆಯುತ್ತಿದ್ದು, ಇದೀಗ ಕಾರ್ಯಕ್ರಮದ ವೇಳಾಪಟ್ಟಿಯಿಂದ ಮದನೀಯಂ ಕಾರ್ಯಕ್ರಮವನ್ನು ಕೈಬಿಟ್ಟಿರುವುದಾಗಿ ದರ್ಗಾ ಸಮಿತಿ ತಿಳಿಸಿದೆ.
ಉಳ್ಳಾಲ ಉರೂಸ್ ಕಾರ್ಯಕ್ರಮದಲ್ಲಿ ಮದನೀಯಂ ನಡೆಸಿಕೊಡಬೇಕೆಂದು ಈ ಹಿಂದೆಯೇ ಉರೂಸ್ ಸಮಿತಿ ಮದನೀಯಂ ಮುಖ್ಯಸ್ಥರಾದ ಲತೀಫ್ ಸಖಾಫಿಯವರಲ್ಲಿ ಕೇಳಿಕೊಂಡಿತ್ತು. ಲತೀಫ್ ಸಖಾಫಿಯವರು ಕೂಡ ಒಪ್ಪಿಕೊಂಡು ದಿನಾಂಕವನ್ನೂ ನಿಗದಿಪಡಿಸಿದ್ದರು. ಇದೀಗ ಕಾರಣಾಂತರಗಳಿಂದ ಉರೂಸ್ ಸಮಿತಿ ಮದನೀಯಂ ಕಾರ್ಯಕ್ರಮವನ್ನು ಉರೂಸ್ ಕಾರ್ಯಕ್ರಮದ ವೇಳಾಪಟ್ಟಿಯಿಂದ ಕೈಬಿಟ್ಟಿದೆ.
ಮದನೀಯಂ ಕಾರ್ಯಕ್ರಮವನ್ನು ಕೈಬಿಟ್ಟ ಉರೂಸ್ ಸಮಿತಿ ವಿರುದ್ಧ ಜಾಲತಾಣದಲ್ಲಿ ಆಕ್ರೋಶವೂ ವ್ಯಕ್ತವಾಗಿದೆ. ಮದನೀಯಂ ಕಾರ್ಯಕ್ರಮ ನಡೆಯುವ ವೇಳೆ ಸಾರ್ವಜನಿಕರು ದೇಣಿಗೆ ನೀಡಿದ ಹಣವನ್ನು ದರ್ಗಾ ಸಮಿತಿಗೆ ನೀಡಲು ಮದನೀಯಂ ಮಜ್ಲಿಸ್ ರೂವಾರಿ ಅಬ್ದುಲ್ ಲತೀಫ್ ಸಖಾಫಿ ಉಸ್ತಾದರು ಒಪ್ಪದ ಕಾರಣ ಉಸ್ತಾದರ ಕಾರ್ಯಕ್ರಮ ಕೈ ಬಿಡಲಾಗಿದೆ ಎನ್ನಲಾಗಿದೆ.