ಶಿವಮೊಗ್ಗ; ದುಷ್ಕರ್ಮಿಗಳ ಅಟ್ಟಹಾಸಕ್ಕೆ ಬಲಿಯಾದ ಹರ್ಷ ಅವರ ಕುಟುಂಬಕ್ಕೆ ನೆರವಿನ ಮಹಾಪೂರ ಹರಿದು ಬಂದಿದ್ದು, ಈವರೆಗೆ ಬರೋಬ್ಬರಿ 2 ಕೋಟಿ ರೂಪಾಯಿಗಳಿಗೂ ಅಧಿಕ ನೆರವು ನೀಡಲಾಗಿದೆ ಎಂದು ವರದಿಯಾಗಿದೆ.
ಈಗಾಗಲೇ ಸರಕಾರದ 25 ಲಕ್ಷ ರೂ. ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ತನ್ನ ಪತ್ನಿ ಮೂಲಕ ಮೊನ್ನೆಯಷ್ಟೇ 10 ಲಕ್ಷ ರೂಪಾಯಿ ನೀಡಿದ್ದರು.
ಆದರೆ ಇದಕ್ಕೂ ಮೊದಲು ಬಿಜೆಪಿಯ ಶಾಸಕ ಯತ್ನಾಳ್, ರೇಣುಕಾಚಾರ್ಯ, ಆರ್ ಅಶೋಕ್ ಹಾದಿಯಾಗಿ ವಿವಿಧ ಬಿಜೆಪಿ ನಾಯಕರು ಮತ್ತು ಸ್ವಾಮೀಜಿಗಳು,ಲಕ್ಷಾಂತರ ಹಣವನ್ನು ಹರ್ಷನ ಕುಟುಂಬಕ್ಕೆ ಚೆಕ್ ಮೂಲಕ ನೀಡಿದ್ದಾರೆಂದು ತಿಳಿದು ಬಂದಿದೆ.
ಹರ್ಷನ ಹತ್ಯೆಯ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಕೂಡ ಕಲೆಕ್ಷನ್ ಮಾಡಲಾಗಿತ್ತು. ಹರ್ಷ ತಾಯಿ ಪದ್ಮಾ ಅವರ ಖಾತೆಯ ವಿವರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಸಹಾಯ ಮಾಡಲು ಹಲವು ಸಂಘಟನೆಗಳು ಕರೆ ನೀಡಿದ್ದವು. ಈ ಮೂಲಕ ಇದೀಗ ಎರಡು ಕೋಟಿಗೂ ಅಧಿಕ ಹಣ ಹರ್ಷ ಕುಟುಂಬಕ್ಕೆ ಹರಿದು ಬಂದಿದೆ ಎಂದು ಅಂದಾಜಿಸಲಾಗಿದೆ.