dtvkannada

ಪಾಣಕ್ಕಾಡ್: ಸಮಸ್ತ ಉಪಾಧ್ಯಕ್ಷ ಹೈದರ್ ಅಲಿ ಶಿಹಾಬ್ ತಂಙಳರ ನಿಧನಕ್ಕೆ ಇಂಡಿಯನ್ ಗ್ರ್ಯಾಂಡ್ ಮುಫ್ತಿ ಎ.ಪಿ ಉಸ್ತಾದ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಮಾಧ್ಯಮದ ಜೊತೆ ಮಾತನಾಡಿದ ಎ.ಪಿ ಉಸ್ತಾದ್ ಹೈದರ್ ಅಲಿ ಶಿಹಾಬ್ ತಂಙಳರ ನಿಧನ ತುಂಬಲಾರದ ನಷ್ಟವಾಗಿದ್ದು.
ನನ್ನ ಮತ್ತು ಅವರ ಐವತ್ತು ವರ್ಷಗಳ ಪರಿಚಯವಾಗಿದ್ದು ಬಹಳ ಆತ್ಮೀಯರಾಗಿದ್ದರು.
ತಂಙಳರ ನಿಧನ ತುಂಬಾನೇ ಬೇಸರ ತರಿಸಿದೆ ಎಂದು ಅವರು ಸಂತಾಪ ವ್ಯಕ್ತಪಡಿಸಿದರು.

ಇದೇ ವೇಳೆ ಅವರಿಗಾಗಿ ಪ್ರಾರ್ಥಿಸ ಬೇಕಾಗಿ ಮನವಿ ಮಾಡಿದರು.ನಾನು ಮತ್ತು ನನ್ನ ಪ್ರಸ್ತಾನದ ಪರವಾಗಿ ತಂಙಳರ ನಿಧನಕ್ಕೆ ಸಂತಾಪ ವ್ಯಕ್ತಪಡಿಸುತ್ತಿದ್ದೇನೆ ಎಂದು ಹೇಳಿದರು.

ಹೈದರ್ ಅಲಿ ಶಿಹಾಬ್ ತಂಙಳ್ ರವರು ಸುನ್ನೀ ಸ್ಟೂಡೆಂಟ್ಸ್ ಫೆಡರೇಷನ್ S.S.F ಇದರ ಸ್ಥಾಪಕಾಧ್ಯಕ್ಷಕರಾಗಿದ್ದ ಸಮಯದ ಸೇವೆಯನ್ನು ಎ.ಪಿ ಉಸ್ತಾದರು ತಮ್ಮ ಫೇಸ್ಬುಕ್ ಪೇಜಿನಲ್ಲಿ ಹಂಚಿಕೊಂಡಿದ್ದಾರೆ.

By dtv

Leave a Reply

Your email address will not be published. Required fields are marked *

error: Content is protected !!