ಮಂಗಳೂರು: ಮನೆಯ ಬಳಿ ಸೈಕಲ್’ನಲ್ಲಿ ಆಟವಾಡುತ್ತಿದ್ದ ಬಾಲಕನಿಗೆ ಟಿಪ್ಪರ್ ಡಿಕ್ಕಿಯಾಗಿ 6 ವರ್ಷದ ಕಂದಮ್ಮ ಮೃತಪಟ್ಟ ದಾರುಣ ಘಟನೆ ಮಂಗಳೂರಿನ ಬಜಾಲ್ ನಲ್ಲಿ ನಡೆದಿದೆ.
![](http://dtvkannada.in/wp-content/uploads/2022/04/IMG-20220420-WA0054-1024x539.jpg)
ಇಲ್ಲಿನ ಕಟ್ಟಪುಣಿ ನಿವಾಸಿಯಾಗಿರುವ ಹಿದಾಯತುಲ್ಲ ಅವರ ಮಗ ಮೊಹಮ್ಮದ್ ಜೀಶನ್(6) ಮೃತ ಬಾಲಕ ಎಂದು ಗುರುತಿಸಲಾಗಿದೆ.
![](http://dtvkannada.in/wp-content/uploads/2022/04/IMG-20220420-WA0058.jpg)
![](http://dtvkannada.in/wp-content/uploads/2022/04/IMG-20220420-WA0055.jpg)
ಇಂದು ಸಂಜೆ ಬಾಲಕ ಸೈಕಲ್ ನಲ್ಲಿ ತನ್ನ ಮನೆಯ ಬಳಿಯಲ್ಲಿರುವ ರಸ್ತೆ ಬಳಿ ಆಟವಾಡುತ್ತಿದ್ದ ಸಂದರ್ಭ ಅದೇ ಮಾರ್ಗದಲ್ಲಿ ಬಂದ ಟಿಪ್ಪರ್ ಬಾಲಕನ ಮೇಲೆಯೇ ಹರಿದಿದೆ.
![](http://dtvkannada.in/wp-content/uploads/2022/04/IMG-20220420-WA0056.jpg)
ಟಿಪ್ಪರ್ ಚಾಲಕನ ಅಜಾಕರೂಕತೆಯೇ ದುರ್ಘಟನೆಗೆ ಕಾರಣ ಎನ್ನಲಾಗಿದೆ.
ಮಂಗಳೂರು ನಗರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.