dtvkannada

ಪುತ್ತೂರು: ಕಾರು ಸೈಡು ಕೋಡುವ ವಿಚಾರದಲ್ಲಿ ಚರ್ಚೆ ತಾರಕಕ್ಕೇರಿ ವ್ಯಕ್ತಿಯೊರ್ವರಿಗೆ ಯುವಕರ ಗುಂಪು ಹಲ್ಲೆ ನಡೆಸಿದ ಘಟನೆ ಮುಕ್ವೆ ಎಂಬಲ್ಲಿ ಇಂದು ಸಂಜೆ ನಡೆದಿದೆ.

ಹಲ್ಲೆಗೊಳಗಾದ ವ್ಯಕ್ತಿಯನ್ನು ನರಿಮೊಗರು ಗ್ರಾಮದ ಎಲಿಕಾ ನಿವಾಸಿ ಮೋನಪ್ಪ ಗೌಡ ಎಂದು ತಿಳಿದು ಬಂದಿದೆ.
ಮೋನಪ್ಪ ಗೌಡ ರವರು ಮುಕ್ವೆ’ಗೆ ತರಕಾರಿ ತರಲು ಓಮ್ನಿ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಮುಕ್ವೆ ಜಂಕ್ಷನ್ ಬಳಿ ದ್ವಿಚಕ್ರ ವಾಹನದಲ್ಲಿ 5,6 ಜನ ಯುವಕರ ಗುಂಪು ಮಾತನಾಡುತ್ತಿದ್ದರು. ಈ ವೇಳೆ ಮೋನಪ್ಪ ಗೌಡ ರು ರಸ್ತೆ ಬದಿಗೆ ಹೋಗುವಂತೆ ಹಾರ್ನ್ ಹಾಕಿದ್ದರು.

ಆಗ ಯುವಕರು ಅಲ್ಲಿಂದ ತೆರಳದೆ ಇದ್ದಾಗ ಮೋನಪ್ಪ ಗೌಡ ರವರು ಕಾರನ್ನು ಚಲಾಯಿಸಿಕೊಂಡು ಮುಂದಕ್ಕೆ ಹೋದಾಗ ಅವರೆಲ್ಲರೂ ಮೋಹನ ಗೌಡ ರವರ ಓಮ್ನಿ ಕಾರನ್ನು ತಡೆದು ನಿಲ್ಲಿಸಿ ಏನು ನೀನು ನಮ್ಮನ್ನು ವಾಹನದ ಅಡಿಗೆ ಹಾಕುತ್ತಿಯಾ? ಎಂದು ಅವಾಚ್ಯ ಶಬ್ದಗಳಿಂದ ಬೈದು, ಹಲ್ಲೆ ನಡೆಸಿ, ಕಾರನ್ನು ಸುಟ್ಟು ಹಾಕುವುದಾಗಿ ಬೆದರಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಈ ಬಗ್ಗೆ ಆಸೀಫ್, ಸಿರಾಜ್, ಝೀಯಾಲ್ ಎಂಬವರ ವಿರುದ್ಧ ಪುತ್ತೂರು ಪೊಲೀಸ್ ಠಾಣೆಯಲ್ಲಿ ಅ.ಕ್ರ:28/2022 ಕಲಂ: 143,147,341,504,323 ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.

By dtv

Leave a Reply

Your email address will not be published. Required fields are marked *

error: Content is protected !!