dtvkannada

ಪುತ್ತೂರು: ಸೌದಿ ಅರೇಬಿಯಾ ನಾಡಿಗೆ ಪವಿತ್ರ ಉಮ್ರಾ ಯಾತ್ರೆ ಹೊರಟಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕುಂಬ್ರ ನಿವಾಸಿ ಅಬ್ದುಲ್ ರಹಿಮಾನ್(65) ಎಂಬವರು ಮದೀನಾದಲ್ಲಿ ಮೃತಪಟ್ಟ ಬಗ್ಗೆ ವರದಿಯಾಗಿದೆ.

ಮುಸ್ಲಿಂ’ ಸಮುದಾಯದ ಪವಿತ್ರ ಸ್ಥಳ ಮಕ್ಕಾ- ಮದೀನ ಯಾತ್ರೆ ಕೈಂಗೊಡು ಕಅಬಾವನ್ನು ಕಣ್ತುಂಬಾ ಕಾಣುವ ಮುತ್ತು ರಸೂಲರ ರೌಲಾ ಸಂದರ್ಶಿಸುವ ಅದಮ್ಯ ಆಸೆಯೊಂದಿಗೆ ಪುತ್ತೂರು ತಾಲೂಕಿನ ಶೇಕಮಲೆ ಜಮಾ ಅತ್ ನ ಅಬ್ದುಲ್ ರಹಿಮಾನ್ ಯಾನೆ ಅಂದುಮಚ್ಚ ಮೇ22 ರಂದು ಉಮ್ರಾ ಯಾತ್ರೆ ಕೈಗೊಂಡಿದ್ದರು.

ಮಕ್ಕಾದಿಂದ ಮದೀನ ಕಡೆ ಯಾತ್ರೆ ಹೊರಟು ಮದೀನ ತಲುಪುತ್ತಿದ್ದಂತೆ ಮೃತಪಟ್ಟಿರುವುದಾಗಿ ವರದಿಯಾಗಿದೆ. ಮೃತದೇಹವನ್ನು ಮದೀನಾದಲ್ಲಿ ಧಫನ ಮಾಡುವುದೆಂದು ತಿಳಿದುಬಂದಿದೆ.
ಮೃತರು 3 ಹೆಣ್ಣು 2 ಗಂಡು ಮಕ್ಕಳನ್ನು ಅಗಲಿದ್ದಾರೆ.

By dtv

Leave a Reply

Your email address will not be published. Required fields are marked *

error: Content is protected !!