ಪುತ್ತೂರು: ಮಹಿಳೆಯೊಬ್ಬರು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು, ವಿಷಯ ತಿಳಿದ ಮುಲ್ಕಿ ಮೈಮುನಾ ಪೌಂಡೇಶನ್ ಸ್ಥಾಪಕರಾದ ಆಸಿಫ್ ಆಪತ್ಬಾಂಧವ ರವರು ಸ್ಥಳಕ್ಕೆ ಬಂದು ಮಹಿಳೆಯನ್ನು ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದಿದ್ದಾರೆ.
ಅನಾರೋಗ್ಯದಿಂದ ಬಳಲುತ್ತಿದ್ದ ಮಹಿಳೆಯನ್ನು ಪುತ್ತೂರು ತಾಲೂಕಿನ ತಿಂಗಳಾಡಿ ನಿವಾಸಿ ಬಿ.ಫಾತಿಮಾ ಎಂದು ತಿಳಿದು ಬಂದಿದೆ. ಗಂಡನ ಮರಣದ ನಂತರ ಒಂಟಿಯಾಗಿದ್ದ ಮಹಿಳೆ, ತನ್ನ ಸಹೋದರಿಯ ಮನೆಯಲ್ಲಿ ವಾಸವಾಗಿದ್ದರು. ಆದರೆ ಕಳೆದ ಹಲವು ದಿನಗಳಿಂದ ತೀವ್ರ ಅನಾರೋಗ್ಯಕ್ಕೀಡಾದ ಮಹಿಳೆ, ಬಡತನದ ಕಾರಣದಿಂದ ಆಸ್ಪತ್ರೆಗೆ ದಾಖಲಾಗದೇ ಮನೆಯಲ್ಲಿಯೇ ಉಳಿದಿದ್ದರು.

ಸಕ್ಕರೆ ಕಾಯಿಲೆ ಇವರನ್ನು ಬಾಧಿಸಿದ ಕಾರಣ ಇವರ ಬಲಕಾಲು ಕೊಳೆತುಹೋಗಿತ್ತು. ಮಹಿಳೆಯ ಈ ಚಿಂತಾಜನಕ ಪರಿಸ್ಥಿತಿಯನ್ನು ಕಂಡು ಸ್ಥಳೀಯ ನಿವಾಸಿಯಾದ ಹುಸೈನ್ ದಾರಿಮಿ ರೆಂಜಲಾಡಿ ಯವರು ಆಸಿಫ್ ಆಪತ್ಬಾಂದವ ರವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದರು.
ಕೂಡಲೇ ಸ್ಪಂಧಿಸಿದ ಆಸಿಫ್ ರವರು ಸ್ಥಳಕ್ಕೆ ಆಗಮಿಸಿ ಮಹಿಳೆಯನ್ನು ಮಂಗಳೂರಿನ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಈ ಸಂದರ್ಭದಲ್ಲಿ ಹುಸೈನ್ ದಾರಿಮಿ ರೆಂಜಲಾಡಿ, ಆಫ್ತಬ್, ಶಾಬ್ನಮ್ ಆಸೀಪ್, ಹಕೀಂ ಕುಂಬ್ರ, ಷರೀಫ್ ಕೈಕಂಬ, ಮಜೀದ್ ಬಾಲಾಯ ಹಾಗೂ ಮೈಮುನಾ ಪೌಂಡೇಶನ್(ರಿ) ಆಶ್ರಮದ ನಿರ್ವಾಹಕರು ಸ್ಥಳದಲ್ಲಿದ್ದರು.



