dtvkannada

ಮಂಗಳೂರು: ಕರಾವಳಿಯಲ್ಲಿ ಬೀಳುತ್ತಿರುವ ಭಾರಿ ಮಳೆಗೆ ಮುನ್ಸೂಚನೆಯಾಗಿ ನಾಳೆಯೂ(ಶುಕ್ರವಾರ) ಕೂಡ ದ.ಕ ಜಿಲ್ಲೆಯಾದ್ಯಂತ ಅಂಗನವಾಡಿ, ಶಾಲಾ ಕಾಲೇಜುಗಳಿಗೆ ದ.ಕ ಜಿಲ್ಲಾಧಿಕಾರಿ ರಜೆ ಘೋಷಿಸಿ ಆದೇಶ ಹೊರಡಿಸಿದ್ದಾರೆ.

ಇದೀಗಾಗಲೇ ಮಂಗಳೂರು ನಗರಾದ್ಯಂತ ಮಳೆಗೆ ಕೃತಕ ನೆರೆ ನೀರು ಸೃಷ್ಟಿಯಾಗಿದ್ದು ನಗರ ಸಂಪೂರ್ಣ ಜಲಾವೃತವಾಗಿದೆ.
ವಿವಿಧ ಕಡೆಗಳಲ್ಲಿ ಮಳೆಯಿಂದಾಗಿ ಬಾರಿ ಅವಂತಾರ ಸೃಷ್ಟಿಯಾಗಿದ್ದು ಮುನ್ನೆಚ್ಚರಿಕಾ ದೃಷ್ಟಿಯಿಂದ ನಾಳೆ ಶುಕ್ರವಾರ ಶಿಕ್ಷಣ ಕೇಂದ್ರಗಳಿಗೆ ರಜೆ ನೀಡಿ ದ.ಕ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ರಾತ್ರಿಯಿಂದ ಸುರಿದ ಭಾರಿ ಮಳೆಗೆ ಮಂಗಳೂರಿನ ಪಡೀಲ್ ಬಳಿ ರಸ್ತೆಗಳು ಸಂಪೂರ್ಣ ಜಾಲಾವೃತಗೊಂಡಿದ್ದು
ಜನ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.
ವಾಹನ ಸವಾರರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದು.
ಶಾಲಾ ಕಾಲೇಜು ವಿದ್ಯಾರ್ಥಿಗಳು, ಉದ್ಯೋಗಿಗಳು ಸಮಯಕ್ಕೆ ಸರಿಯಾಗಿ ತಲುಪಲು ಸಾಧ್ಯವಾಗದೇ ಪರದಾಡಿದರು.

ಭಾರಿ ಮಳೆಗೆ ಜನ ಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದು. ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಪಡೀಲ್ ಫಸ್ಟ್ ನ್ಯೂರೋ ಆಸ್ಪತ್ರೆ ಬಳಿ ರಸ್ತೆ ಸಹಿತ ಸುತ್ತಮುತ್ತಲು ಜಲಾವೃತವಾಗಿದೆ.

By dtv

Leave a Reply

Your email address will not be published. Required fields are marked *

error: Content is protected !!