dtvkannada

'; } else { echo "Sorry! You are Blocked from seeing the Ads"; } ?>

ಪುತ್ತೂರು :ಕುಮಾರಧಾರ ನದಿಯಲ್ಲಿ ಸ್ನಾನ ಮಾಡಲು ಇಳಿದ ಯುವಕನೋರ್ವ ನೀರುಪಾಲಾದ ಘಟನೆ ರವಿವಾರ ಸಂಜೆ ನಡೆದಿದೆ.

ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿಹೋದ ವ್ಯಕ್ತಿ ಬೆಂಗಳೂರು‌ ಮೂಲದ ಶಿವು (೨೫) ಎಂದು ತಿಳಿದು ಬಂದಿದೆ.

'; } else { echo "Sorry! You are Blocked from seeing the Ads"; } ?>

ಪೋಲೀಸ್‌, ಅಗ್ನಿಶಾಮಕ ದಳ ಸ್ಥಳೀಯರ ನೆರವಿನೊಂದಿಗೆ ಯುವಕನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಶಿವು ಮೂಲತಃ ಮಂಡ್ಯ ನಿವಾಸಿಯಾಗಿದ್ದು ಸ್ನೇಹಿತರ ಜೊತೆ ಕುಕ್ಕೆ ಸುಬ್ರಹ್ಮಣ್ಯ ಯಾತ್ರೆಗೆ ಬಂದಿದ್ದ. ನೀರಿಗೆ ಇಳಿಯದಂತೆ ಸ್ನಾನಘಟ್ಟದಲ್ಲಿ ಹಗ್ಗ ಕಟ್ಟಿದ್ದರೂ ನೀರಿಗೆ ಇಳಿದಿದ್ದ ಎಂದು ಸ್ಥಳೀಯರು ಹೇಳಿದ್ದಾರೆ.

'; } else { echo "Sorry! You are Blocked from seeing the Ads"; } ?>

ಶಿವು ನೊಂದಿಗೆ ಬಂದಿದ್ದ ಸ್ನೇಹಿತರು ನೀರಿಗೆ ಇಳಿಯದಂತೆ ಬುದ್ದಿ ಹೇಳಿದರೂ ಮಾತು ಕೇಳದೇ ಶಿವು ನೀರಿಗೆ ಇಳಿದಿದ್ದಾನೆಂದು ತಿಳಿದು ಬಂದಿದೆ. ಮಳೆಗಾಲದ ನೀರಿನಲ್ಲಿ ಸೆಳೆತ ಜೋರಾಗಿದ್ದ ಕಾರಣ ಕೊಚ್ಚಿಕೊಂಡು ಹೋಗಿದ್ದಾನೆ ಎಂದು ಶಂಕಿಸಲಾಗಿದೆ. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಶವಗಾಗಿ ಹುಡುಕಾಟ ನಡೆಯುತ್ತಿದೆ.

'; } else { echo "Sorry! You are Blocked from seeing the Ads"; } ?>

By dtv

Leave a Reply

Your email address will not be published. Required fields are marked *

error: Content is protected !!