';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ಬೆಳಗಾವಿ:ರಾಜ್ಯ ಅರಣ್ಯ ಮತ್ತು ಆಹಾರ ನಾಗರಿಕ ಇಲಾಖೆ ಸಚಿವ ಉಮೇಶ್ ಕತ್ತಿ ರವರ ನಿಧನದ ಹಿನ್ನಲೆ ರಾಜ್ಯಾದ್ಯಂತ ಇಂದು ಒಂದು ದಿನ ಶೋಕಾಚಾರಣೆಗೆ ಕರೆ ಕೊಟ್ಟಿದ್ದು ಸರ್ಕಾರದ ಈ ನಡೆಯ ವಿರುದ್ಧ ವಿಪಕ್ಷ ನಾಯಕ ಗರಂ ಆಗಿದ್ದಾರೆ.
ಮಾಧ್ಯಮದೊಂದಿಗೆ ಮಾತನಾಡಿದ ವಿಪಕ್ಷ ನಾಯಕ ಮಾಜಿ ಸಿ.ಎಂ ಸಿದ್ದರಾಮಯ್ಯ
ಅಧಿಕಾರದಲ್ಲಿರುವಾಗಳೇ ಉಮೇಶ್ ಕತ್ತಿ ರವರು ನಿಧನರಾಗಿದ್ದು ರಾಜ್ಯದ ಒಬ್ಬ ಮಂತ್ರಿ ನಿಧನರಾದಾಗ ಕೇವಲ ಒಂದು ದಿನ ಶೋಕಾಚಾರಣೆ ನಡೆಸುವುದಲ್ಲ ಮೂರು ದಿನಗಳ ಕಾಲ ಶೋಕಾಚಾರಣೆ ನಡೆಸಬೇಕು ಸರ್ಕಾರಕ್ಕೆ ಇದೆಲ್ಲ ಎಲ್ಲಿ ಅರ್ಥಆಗಬೇಕು ಎಂದು ಬೇಸರ ವ್ಯಕ್ತಪಡಿಸಿದರು.
ಕತ್ತಿರವರು ನನ್ನ ಆತ್ಮೀಯ ಸ್ನೇಹಿತ ಅವರ ಸಾವು ನನಗೆ ತುಂಬಾನೇ ಬೇಸರ ತಂದಿದೆ.
ಬಿಜೆಪಿಯವರ ಜನೋತ್ಸವ ಕಾರ್ಯಕ್ರಮ ನಾಳೆಯಿರುವುದರಿಂದ ಅದಕ್ಕಾಗಿ ನಿಧನರಾದ ಸಚಿವರಿಗೆ ಗೌರವ ನೀಡದೇ ಒಂದೇ ದಿನಕ್ಕೆ ಶೋಕಾಚಾರಣೆ ಸೀಮಿತಗೊಳಿಸಿದ್ದಾರೆ ಇದು ನಾಚಿಕೆ ಕೇಡು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ಅವರ ಬಗ್ಗೆ ನಾನೇನು ಮಾತನಾಡಲ್ಲ ಎಂದು ಗರಂ ಆಗಿದ್ದಾರೆ.