dtvkannada

ಮಂಗಳೂರು: ಮಧ್ಯಪಾನದ ಮತ್ತಿನಲ್ಲಿ ತನ್ನ ಪತ್ನಿಯನ್ನು ಕೊಲೆ ಮಾಡಿದ ಘಟನೆ ಮಂಗಳೂರಿನ ಬಜಪೆ ಠಾಣಾ ವ್ಯಾಪ್ತಿಯ ಎಕ್ಕಾರಿನಲ್ಲಿಂದು ನಡೆದಿದೆ.

ಘಟನೆಯಲ್ಲಿ ಮೃತಪಟ್ಟ ಮಹಿಳೆಯನ್ನು ಎಕ್ಕಾರು ಪಲ್ಲದ ಕೋಡಿ ನಿವಾಸಿ ಸರಿತಾ ಎಂದು ಗುರುತಿಸಲಾಗಿದೆ.

ಭಾನುವಾರ ರಾತ್ರಿ ಕುಡಿದ ಮತ್ತಿನಲ್ಲಿ ಪತಿ ದುರ್ಗೇಶ್ ಪತ್ನಿಯನ್ನು ಕೊಲೆ ಮಾಡಿದ್ದಾನೆ ಎನ್ನಲಾಗಿದೆ.

ದುರ್ಗೆಶ್ ಕುಡಿತದ ಚಟ ಹೊಂದಿದ್ದು ಪ್ರತಿ ದಿನ ಪತ್ನಿ ಸರಿತಾಳಿಗೆ ಕಿರುಕುಳ ಕೊಡುತ್ತಿದ್ದ. ಈ ಹಿಂದೆ ಹಲವು ಬಾರಿ ದುರ್ಗೇಶ್ ಪತ್ನಿಗೆ ಹಲ್ಲೆ ನಡೆಸಿದ್ದು ಗಾಯಗೊಂಡ ಪತ್ನಿ ಒಂದೆರಡು ಬಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದಿದ್ದರೆಂದು ತಿಳಿದು ಬಂದಿದೆ.

ಆದರೆ ನಿನ್ನೆ ಇತನ ವರ್ತನೆ ಅತಿರೇಕಕ್ಕೆ ಹೋಗಿದ್ದು, ಇದಕ್ಕೆ ಬಡ ಜೀವ ಸರಿತ ಬಲಿಯಾಗಿದ್ದಾರೆ.

ಘಟನೆ ಸಮಯ ಮನೆಯಲ್ಲಿದ್ದ ದುರ್ಗೇಶನ ಮಗ ರಾಹಲ್ ಹೆದರಿಕೊಂಡು ಸ್ಥಳದಿಂದ ಓಡಿಕೊಂಡು ತನ್ನ ಅಜ್ಜಿಯ ಮನೆಗೆ ಹೋಗಿದ್ದಾನೆ. ಈ ಬಗ್ಗೆ ಬಜಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

By dtv

Leave a Reply

Your email address will not be published. Required fields are marked *

error: Content is protected !!