dtvkannada

'; } else { echo "Sorry! You are Blocked from seeing the Ads"; } ?>

ಸಾಂದರ್ಭಿಕ ಚಿತ್ರ

ಉಪ್ಪಿನಂಗಡಿ: ಕಾರಿನಲ್ಲಿ ಬಂದ ಅಪಹರಣಕಾರರು ಬಾಲಕನೊಬ್ಬನನ್ನು ಅಪಹರಿಸಲು ಯತ್ನಿಸಿದ ಘಟನೆ ಉಪ್ಪಿನಂಗಡಿಯ ಮಠ ಎಂಬಲ್ಲಿ ನಿನ್ನೆ ಸಂಜೆ ನಡೆಡಿದೆ.

'; } else { echo "Sorry! You are Blocked from seeing the Ads"; } ?>

ಓಮ್ನಿ ಕಾರಿನಲ್ಲಿ ಬಂದವರು ಬಾಲಕನನ್ನು ಅಪಹರಿಸಲು ಯತ್ನಿಸಿದ್ದು, ಬಾಲಕ ಅವರ ಹಿಡಿತದಿಂದ ತಪ್ಪಿಸಿಕೊಂಡು ಓಡಿ ಬಂದಿದ್ದಾನೆ ಎಂದು ತಿಳಿದು ಬಂದಿದೆ.ಅಪಹರಣ ಯತ್ನಕ್ಕೆ ಒಳಗಾದ ಬಾಲಕನನ್ನು ಹಿರ್ತಡ್ಕದ ಜನತಾ ಕಾಲನಿ ಯ ಸಿಫಾನ್ (14) ಎನ್ನಲಾಗಿದೆ.ಮಂಗಳವಾರ ಸಂಜೆ ಬೀಡಿ ನೀಡಲು ಬೀಡಿ ಬ್ರಾಂಚ್‌ಗೆ ತೆರಳುತ್ತಿದ್ದ ವೇಳೆ ಅಪಹರಣದ ವಿಫಲ ಯತ್ನ ನಡೆದಿದೆ.ಬಾಲಕ ಸಿಫಾನ್ ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಆತನ ಹಿಂಬದಿಯಿಂದ ಓಮ್ನಿ ಕಾರು ಬಂದಿದೆ ಎನ್ನಲಾಗಿದೆ.

ಒಮ್ನಿಯಿಂದ ಓರ್ವ ಇಳಿದಿದ್ದು ಆತ ಬಾಲಕನ ಕೈಯನ್ನು ಹಿಡಿದಿದ್ದಾನೆ.ಈ ವೇಳೆ ಓಮ್ನಿ ಕಾರು ಇವನಿಗೆ ಅಡ್ಡಲಾಗಿ ಬಂದು ನಿಂತಿತ್ತು ಎಂದು ಬಾಲಕ ಮನೆಯವರಲ್ಲಿ ತಿಳಿಸಿದ್ದ ಎನ್ನಲಾಗಿದೆ.ಆಗ ಈ ಬಾಲಕ ಅಪಹರಣಕಾರರಿಂದ ಬಿಡಿಸಿಕೊಂಡು ಮನೆಗೆ ಓಡಿ ಬಂದಿದ್ದಾನೆ. ಓಮ್ನಿಯೂ ಬೆಂಗಳೂರು ಕಡೆ ಪರಾರಿಯಾಗಿದೆ ಎನ್ನಲಾಗಿದೆ.

'; } else { echo "Sorry! You are Blocked from seeing the Ads"; } ?>

ತಿಂಗಳ ಹಿಂದೆ ಇದೇ ರೀತಿ ನಡೆದಿತ್ತು:ತಿಂಗಳ ಹಿಂದೆ ( ಅ.28) ಉಪ್ಪಿನಂಗಡಿಯ ಲಕ್ಷ್ಮೀ ನಗರ ನಿವಾಸಿ 12 ರ ಹರೆಯದ ಬಾಲಕನ ಅಪಹರಣಕ್ಕೂ ವಿಫಲ ನಡೆದಿತ್ತು. ಆ ಬಾರಿಯೂ ದುಷ್ಕರ್ಮಿಗಳು ಕೃತ್ಯಕ್ಕೆ ಓಮ್ನಿ ಕಾರನ್ನೇ ಬಳಸಿದ್ದರು ಎಂದು ಹೇಳಲಾಗಿತ್ತು. ಇದೀಗ ಆ ಘಟನೆ ನಡೆದು ಸರಿಯಾಗಿ ಒಂದು ತಿಂಗಳು ಕಳೆಯುತ್ತಲೇ ಮತ್ತೊಂದು ಬಾಲಕನ ಅಪಹರಣ ಯತ್ನ ನಡೆದಿರುವುದು ಸಾರ್ವಜನಿಕ ವಲಯದಲ್ಲಿ ಭೀತಿಗೆ ಕಾರಣವಾಗಿದೆ.

'; } else { echo "Sorry! You are Blocked from seeing the Ads"; } ?>

By dtv

Leave a Reply

Your email address will not be published. Required fields are marked *

error: Content is protected !!