ಪಾಣಕ್ಕಾಡ್: ಸಮಸ್ತ ಕೇರಳ ಜಂ-ಇಯ್ಯತುಲ್ ಉಲಮಾ ಇದರ ಉಪಾಧ್ಯಕ್ಷ ಮುಸ್ಲಿಮರ ಆಧ್ಯಾತ್ಮಿಕ ನಾಯಕ ಹೈದರ್ ಅಲಿ ಶಿಹಾಬ್ ತಂಙಳ್ ಅಲ್ಪಕಾಲದ ಅನಾರೋಗ್ಯದಿಂದ ಇದೀಗ ಆಸ್ಪತ್ರೆಯಲ್ಲಿ ನಿಧನರಾದರು.
ಇವರು ಕೇರಳ ಮುಸ್ಲಿಂ ಲೀಗ್ ಇದರ ರಾಜ್ಯಾಧ್ಯಕ್ಷರಾಗಿದ್ದರು.
ಅಲ್ಪ ಕಾಲದ ಅಸೌಖ್ಯ ನಿಮ್ಮಿತ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ನಿನ್ನೆ ರಾತ್ರಿ ಇವರಿಗೆ ವೆಂಟಿಲೇಟರ್ ಅಳವಡಿಸಲಾಗಿತ್ತು.
ಇವರ ಆರೋಗ್ಯಕ್ಕಾಗಿ ನಿನ್ನೆ ಹಲವೆಡೆ ಪ್ರಾರ್ಥನಾ ಮಜ್ಲೀಸ್ ಗಳು ನಡೆಸಿದ್ದು.
ಎ. ಪಿ ಉಸ್ತಾದ್ ಕೂಡ ತಂಙಳ್ ರವರ ಆರೋಗ್ಯಕ್ಕಾಗಿ ಪ್ರಾರ್ಥಿಸಿದ್ದರು.
ಇಂದು ಮಧ್ಯಾಹ್ನದ ವೇಳೆ ತಂಙಳ್ ರವರು ಇಹಲೋಕ ತ್ಯಜಿಸಿದ್ದು, ಕೇರಳದ ಬಹಳ ಪ್ರಸಿದ್ದಿಯಾದ ಕೊಡಪ್ಪನಕ್ಕಲ್ ತರವಾಡ್ ನ ಪ್ರಸಿದ್ದಿ ಪಡೆದ ಓರ್ವ ಮುಸ್ಲಿಂ ನಾಯಕರಾಗಿದ್ದಾರೆ ಹೈದರ್ ಅಲಿ ಶಿಹಾಬ್ ತಂಙಳ್.